Sri Mangaladevi Annual Jathra Festival 2023 Day 3

Blissful Darshan

Shatha Rudrabhisheka

⚜✧ಮಂಗಳಮ್ಮನಿಗೆ ಶತ ರುದ್ರಾಭಿಷೇಕ✧⚜

🪷꘏ವರ್ಷಾವಧಿ ಜಾತ್ರಾ ಉತ್ಸವದ ಪ್ರಯುಕ್ತ ಇಂದಿನ ಸೋಮವಾರದ ಪ್ರಾತಃಕಾಲ ಶ್ರೀ ಮಂಗಳಾದೇವಿ ಅಮ್ಮನವರಿಗೆ ಶತ ರುದ್ರಾಭಿಷೇಕ ಸೇವೆಯು ನೆರವೇರಿತು꘏🪷

ಇಂದಿನ ಶುಭಕೃತ ನಾಮ ಸಂವತ್ಸರದ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಪಂಚಮಿಯ ಜಾತ್ರಾ ಪರ್ವಕಾಲದ ತೃತೀಯ ದಿನವಾದ ಸೋಮವಾರದಂದು ಪ್ರಾತಃಕಾಲ ೮’ಕ್ಕೆ ಸರಿಯಾಗಿ ಮಹಾನ್ಯಾಸ ಪ್ರಾಕಾರದಲ್ಲಿ ರುದ್ರ ಪಠಣದ ಮೂಲಕ ಶ್ರೀ ಮಂಗಳಾದೇವಿ ಅಮ್ಮನವರಿಗೆ ಶತರುದ್ರಾಭಿಷೇಕವು ಪ್ರಾರಂಭವಾಯಿತು.ॐ

ವಿಶೇಷವಾಗಿ ಇಂದು ಸೋಮವಾರ ಮಂಜುನಾಥ ದೇವರ ದಿನ. ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ನಾಲ್ಕನೆಯ ಕಾಂಡದಲ್ಲಿ ಬರುವ ‘ರುದ್ರಾಧ್ಯಾಯದ ರುದ್ರ ನಮಕ’ ಹಾಗೂ ‘ರುದ್ರ ಚಮಕ’ ಮಹಾ ಮಂತ್ರಗಳ ಪಠಣದೊಂದಿಗೆ ದೇವಳದ ಮುಖ ಮಂಟಪದಲ್ಲಿ ೧೧’ಮಂದಿ ಋತ್ವಿಜ ವಿಪ್ರೋತ್ತಮರಿಂದ ರುದ್ರ ಪಠಣದ ನೂರು ಆವರ್ತನ ಸಹಿತ ಶತ ರುದ್ರಾಭಿಷೇಕವು ಶ್ರೀ ದೇವಿಗೆ ನಡೆಯಿತು.

ರುದ್ರಾಭಿಷೇಕವು ‘ಶಿವ’ ದೇವರಿಗೆ ಮಾತ್ರ ಪ್ರಾಧಾನ್ಯತೆ ಹೊಂದಿದ್ದರೂ, ಶ್ರೀ ಕ್ಷೇತ್ರ ಮಂಗಳಾದೇವಿಯಲ್ಲಿ ‘ಶ್ರೀದೇವಿ’ಯು ಲಿಂಗರೂಪಲ್ಲಿರುವ ಪ್ರಾಯಶಃ ಭಾರತದಲ್ಲೇ ಅತ್ಯಂತ ಅಪರೂಪವಾದ ದೇಗುಲವಿದಾಗಿದೆ. ಸಾನಿಧ್ಯ ವಿಶೇಷ’ವೆಂಬಂತೆ ಒಂದೇ ಕ್ಷೇತ್ರದಲ್ಲಿ ಶಿವ-ಶಕ್ತಿಯರ ಸಾನಿಧ್ಯ. ತಾಯಿಯ ಬಿಂಬದಲ್ಲಿ ‘ಶಿವಶಕ್ತಿ’ಯು ಅಡಕವಾಗಿದ್ದು ‘ಪ್ರಕೃತಿ-ಪುರುಷ’ ಶಕ್ತಿಯೊಂದಿಗೆ ಶಿವಾತ್ಮಿಕೆಯಾಗಿ ಶಿವಶಕ್ತ್ಯಾತ್ಮಿಕಳಾಗಿ ಶಿವಶಕ್ತಿ ಅಧಿಷ್ಟಾನದೊಂದಿಗೆ ಬಿಂಬರೂಪದಲ್ಲಿ ಪ್ರಸನ್ನಳಾಗಿರುವ ದೇವಿಯನ್ನು ಧಾರಾಪಾತ್ರೆಯನ್ನಿಟ್ಟು ಆರಾಧಿಸುವುದರಿಂದ ಇಲ್ಲಿ ಮಾತ್ರ ಶ್ರೀ ದೇವಿಗೆ ‘ರುದ್ರಾಭಿಷೇಕ’ದ ಸೇವೆಯೂ ನಡೆಯುತ್ತದೆ.

ಈಶ್ವರನು ಅಭಿಷೇಕ ಪ್ರಿಯನು. ಸಕಲ ಕಲ್ಯಾಣಗುಣ ಪರಿಪೂರ್ಣನಾದ ಮಂಜುನಾಥ ದೇವರಿಗೆ ರುದ್ರಾಭಿಷೇಕದ ಮೂಲಕ ಪೂಜಿಸಿದಲ್ಲಿ ಪರಮಾತ್ಮನು ಸಂತೃಪ್ತನಾಗುತ್ತಾನೆ. ರುದ್ರ’ ಎಂದರೆ ಲಯಕರ್ತ ( ರೋದಯತೀತಿ ರುದ್ರಃ) ಎಂದರ್ಥ. ಅಥವಾ ಮಹಾ ರೋಗವನ್ನು, ಸಂಸಾರ ದುಃಖವನ್ನೂ ನಾಶ ಮಾಡುವವನು ರುದ್ರ ( ರುಜಂ ಸಂಸಾರ ದುಃಖಂ ದ್ರಾವಯತೀತಿ ರುದ್ರಃ) ಸರ್ವರ ಕಷ್ಟ ಕಾರ್ಪಣ್ಯವನ್ನು ಕಳೆದು ಕಾಯುವವನೇ ರುದ್ರ. 🔱📿📿ॐ

ರುದ್ರ ನಮಕ-ಚಮಕಗಳು ಲೋಕಹಿತಂಕರನಾದ ಶ್ರೀ ಪರಶಿವನ ಪರಮ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ. ರುದ್ರಪಾರಾಯಣ ಮಾಡುವ ಸರ್ವರಿಗೂ ಶಿವಾನುಗ್ರಹವಾಗುವಂತೆ ಮಾಡಿ ಸಂಪೂರ್ಣ ಬದುಕನ್ನು ಶಿವಮಯಗೊಳಿಸುವ ಶಕ್ತಿಯಿದ್ದು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದಲ್ಲಿ ನಮ್ಮೆಲ್ಲರನ್ನು ಸಕಲ ಸಂಕಷ್ಟದಿಂದ ಪಾರುಮಾಡಿ, ಸೌಭಾಗ್ಯ ಸಹಿತ ಮನೋಭೀಷ್ಟೆಯ ಕೊಟ್ಟು ಆಶೀರ್ವದಿಸುವನು.

ರುದ್ರಾಧ್ಯಾಯ’ವು ಯಜುರ್ವೇದ ಸಂಹಿತೆಯ ಒಂದು ಅಂಗ. ಕೃಷ್ಣ ಯಜುರ್ವೇದ ತೈತ್ತರೀಯ ಸಂಹಿತೆಯ ಚತುರ್ಥ ( *ವೈಶ್ವ ದೇವಂ ಕಾಂಡಮ್*‌) ಕಾಂಡದ ಪಂಚಮ ಪ್ರಪಾಠಕ (ಅಧ್ಯಾಯ)ವೇ ‘ರುದ್ರಾಧ್ಯಾಯ’ ಅಥವಾ ‘ರುದ್ರಪ್ರಶ್ನ’ವೆಂದು ಪ್ರಸಿದ್ಧಿಯಾಗಿ, ಶೈವ ಸಂಪ್ರದಾಯದ ನಿತ್ಯದೇವತಾರ್ಚನೆಯ ಒಂದು ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿದೆ.

ಶಿವಪುರಾಣದ ಪ್ರಕಾರ ‘ರುದ್ರ’ ಹಾಗೂ ‘ಚಮ’ಗಳ ಪಠಣ ಶಿವನಿಗೆ ಪ್ರಿಯಾತೀತವಾದುದು. ಹೀಗೆ ರುದ್ರಾಭಿಷೇಕವನ್ನು ಯಜುರ್ವೇದದ ಪ್ರಕಾರವಾದ ‘ರುದ್ರನಮಕ’ ಹಾಗೂ ‘ರುದ್ರಚಮಕ’ ಗಳ ರುದ್ರಪಠಣದ ಮೂಲಕ ಮೊದಲ್ಗೊಂಡಿತು.

ಅಭಿಷೇಕದ ಮುಖೇನ ‘ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆ’ ಯ ನಾಲ್ಕನೆಯ ಕಾಂಡದಲ್ಲಿನ ಪ್ರಕಾರವಾದ ‘ರುದ್ರ ನಮಕ’ ಹಾಗೂ ‘ ರುದ್ರ ಚಮಕ’ ಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾ ಬಿಲ್ವಪತ್ರೆಗಳ ಸಮರ್ಪಣೆಯೊಂದಿಗೆ ಅಭಿಷೇಕ ಪ್ರಿಯನಾದ ಶಿವ ದೇವರನ್ನು ಆರಾಧಿಸಲಾತ್ತದೆ.

ಅದೇ ಪ್ರಕಾರವಾಗಿ ಭಕ್ತರ ಮನೋಭಿಷ್ಟಗಳನ್ನು ನೆರವೇರಿಸಿ ಕೊಡುವ ಸಪತ್ನೀ ಸಮೇತ ನೆಲೆನಿಂತ ರುದ್ರ ಸ್ವರೂಪಿ ಮಂಜುನಾಥನ ಸಹಿತ ಬಿಂಬರೂಪದಿ ಶತ ರುದ್ರಾಭಿಷೇಕ ಸೇವೆಯನ್ನು ಸಂತೋಷದಿಂದ ಸ್ವೀಕೃತ ಮಾಡಿಕೊಂಡು ಪ್ರೀತ್ಯರ್ಥಳಾದ ಪರಮೇಶ್ವರಿಯು ಪ್ರಸನ್ನಳಾಗಿ ವಿಶೇಷವಾಗಿ ಇಂದಿನ ಸೋಮವಾರ ಜಾತ್ರಾ ಮಹೋತ್ಸವದ ಪರ್ವಕಾಲದಲ್ಲಿ ನಮ್ಮೆಲ್ಲರ ಇಷ್ಟಾರ್ಥಗಳನ್ನು ಅನುಗ್ರಹಿಸಿ ಆಶೀರ್ವದಿಸಲಿ.

✨🌼 ಓಂ ಹರ ನಮಃ ಪಾರ್ವತೀ ಪತಯೇ ಹರ ಹರ ಮಹದೇವ್ 🌼✨

✨🔱ಲೋಕಾ ಸಮಸ್ತಾ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು.🔱✨
🔅ಓಂ ಶಾಂತಿಃ ಶಾಂತಿಃ ಶಾಂತಿಃ🔅

Mangalarathi

Bali